A nurturing space for learning and exploring agro-ecological farming practices!
September 20, 2018
ಶ್ರೀಯುತ ನಾಗೇಂದ್ರರ ಪರಿಸರ ಕೃಷಿ
ಇವರು ಶ್ರೀಯುತ ನಾಗೇಂದ್ರ. ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳದವರು. ಈ ಗ್ರಾಮದ ಅನೇಕರು ತಮ್ಮ ಹೊಲ ಗದ್ದೆ ಗಳನ್ನು ಮಾರಿ ತಾರಸಿ ಮನೆಗಳನ್ನು ಕಟ್ಟಸಿಕೊಂಡು ಬೇರೆ ಬೇರೆ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಈ ಕಾಲದಲ್ಲೂ ಇವರು ದೊಡ್ಜ ಕುಟುಂಬದೊಂದಿಗೆ ಹಳೆ ಮನೆಯಲ್ಲಿಯೇ ವಾಸಿಸುತ್ತಾ, ಕೃಷಿಯನ್ನೇ ಜೀವನಾಧಾರವಾಗಿ ನಂಬಿಕೊಂಡಿರುವವರು.
ಕಳೆದ 20 ವರ್ಷಗಳಿಂದ ತಮ್ಮ 10 ಎಕರೆ ನೀರಾವರಿ ಭೂಮಿಯಲ್ಲಿ ಕೆಮಿಕಲ್ ಪಾರ್ಮಿಂಗ್ ಹಾಗೂ ಏಕ ಬೆಳೆ ಪದ್ದತಿಯಲ್ಲಿ ತರಕಾರಿ ಬೆಳೆದೂ ಬೆಳೆದೂ ಕೈ ಸುಟ್ಟು ಕೊಂಡು ಹತಾಷರಾಗಿದ್ದವರು
2016: Mono cropping with heavy chemical inputsEarlier field looks barren after the harvest of every crop
ಇವರು ಬೆಳವಲ ಫೌಂಡೇಷನ್ ನ ಮಾರ್ಗದರ್ಶನ ಪಡೆದು ಕಳೆದ ವರ್ಷದಿಂದ ಪರಿಸರ ಕೃಷಿಯತ್ತ ಒಲವು ತೋರಿಸಿ ಬಹು ಬೆಳೆ ಪದ್ದತಿಗೆ ಬದಲಾಗುತ್ತಿದ್ದಾರೆ!
ಒಂದು ವರ್ಷದಲ್ಲಿಯೇ 50 ಭಾಗ ರಸಾಯಿನಿಕ ಗಳನ್ನು ಕಡಿಮೆ ಮಾಡಿ, ಬಯೋಡೈಜಷ್ಟರ್, ಬೇವಿನ ಬೀಜದಕಷಾಯ ಇತ್ಯಾದಿಗಳನ್ನು ತಯಾರಿಸಿಕೊಂಡು ಉಪಯೋಗಿಸುತ್ತಿದ್ದಾರೆ!
Bio digestor for plant protection and to supplement nutritionNeem in cow urine helps in controlling many pests..
ಮೂಸುಂಬೆ, ನಿಂಬೆ, ಸೀಬೆ, ಬಾಳೆ, ಪಪಾಯ ಇತ್ಯಾದಿ ಬಹುವಾರ್ಷಿಕ ಬೆಳೆಗಳನ್ನು ನೆಟ್ಟು ಅವುಗಳ ಮದ್ಯದಲ್ಲಿ ಅವರು ಹಿಂದೆ ಬೆಳೆಯುತ್ತಿದ್ದ ತರಕಾರಿಗಳನ್ನೂ ಬೆಳೆಯುತ್ತಿದ್ದಾರೆ.
Now Guava and banana are grown as mixed crops and vegetables as inter crops
ಇವರ ಮತ್ತೊಂದು 10 ಎಕರೆ ಹೊಲದಲ್ಲಿ ಗೇರು, ಶ್ರೀಗಂಧ, ರಕ್ತ ಚಂದನ, ಮಾವು ಇತ್ಯಾದಿಗಳನ್ನೊಳಗೊಂಡಮಿಶ್ರ ಕೃಷಿ ಮಾಡಲು ಸಜ್ಜಾಗುತ್ತಿದ್ದಾರೆ! ಮುಖದಲ್ಲಿ ನಗೆ ಮೂಡುತ್ತಿದೆ!!
ಇನ್ನೆರಡು ವರ್ಷದಲ್ಲಿ ಇವರು ಸಂಪೂರ್ಣ ಪರಿಸರ ಕೃಷಿಕರಾಗಿ ಯಶಸ್ವಿ ಯಾಗುವ ಎಲ್ಲಾ ಭರವಸೆ ತೋರಿಸುತ್ತಿದ್ದಾರೆ!